ನಮ್ಮ ಸಾಹಸ ಯಾತ್ರೆ - ಭಾಗ -೧೦ - ಕೈ ಕೊಟ್ಟ ಸಂಕ
ನಾವು ಅವನ ಗುಡಿಸಲಿಂದ ಹೊರಟಾಗ ಐದು ಕಾಲಾಗಿತ್ತು. ಬೇಗ ಅವರ ಮನೆ ತಲುಪಲು ಜೋರಾಗಿ ನಡೆಯುತ್ತಿದ್ದೆವು. ಅರುಣ ನಮ್ಮ ಜೊತೆ ನಡೆಯಲಾರದೆ ಓದಿ ಬರುತ್ತಿದ್ದ. ಕಾಡು ಮೊದಲಿನಷ್ಟು ದಟ್ಟವಲ್ಲದ್ದಿದ್ದರೂಕಾಲು ದಾರಿಯೇನು ಇರಲ್ಲಿಲ್ಲ. ನಾವು ಹೋಗಿದ್ದೆ ದಾರಿಯಾಗಿತ್ತು. ಬಹುಶಃ ಮಳೆಗಾಲದ ನಂತರ ಕಾಲು ದಾರಿ ಮುಚ್ಚಿ ಹೋಗಿರಬೇಕು. ಆತನ ಮನೆಯಿಂದ ಸ್ವಲ್ಪ ದೂರ ಕಾಲು ದಾರಿ ಇತ್ತಷ್ಟೇ. ನಾವೆಲ್ಲಿ ದಿಕ್ಕು ತಪ್ಪಿ ಕಾಡು ಪಾಲಾಗುತ್ತೆವೋ ಎಂದು ಹೆದರಿಕೆ ಯಾಯಿತು. ಅಷ್ಟರಲ್ಲಿ ಒಂದು ಹೊಳೆ ಹರಿಯುತ್ತಿರುವ ಶಬ್ದ ಕೇಳಿ ಬಂತು. ಸ್ವಲ್ಪ ಹೊತ್ತಿನ ನಂತರ ಒಂದು ಚಿಕ್ಕ ಹಳ್ಳ ನಮಗೆ ಎದುರಾಯಿತು. ನಾವು ಒಟ್ಟು ಹೇಗೋ ನಡೆದು ಬಂದಿದ್ದರೂ ಹೆಚ್ಚು ಕಡಿಮೆ ಸರಿ ದಾರಿಗೆ ಬಂದಿದ್ದೆವು. ಏಕೆಂದರೆ ಸ್ವಲ್ಪ ದೂರದಲ್ಲಿಯೇ ಹಳ್ಳ ದಾಟಲು ಹಾಕಿದ್ದ ಸಂಕ ಕಾಣಿಸಿತು. ನಾವು ಅದರ ಬಳಿ ಹೋಗಿ ನೋಡಿದರೆ ಎರಡು ಮರಗಳನ್ನು ಉದ್ದಕ್ಕೆ ಹಾಸಿದ್ದರು. ನಾನು ನಿದಾನ ಒಬ್ಬೊಬ್ಬರಾಗಿ ದಾಟಬೇಕೆಂದು ಹೇಳಿದೆ. ಮೊದಲು ತಾನು ದಾಟುತ್ತೆನೆಂದು ಶರತ್ ಬಂದ. ಆತ ನಿದಾನ ಕೂತುಕೊಂಡು ತೆವಳುತ್ತ ದಾಟಿದ. ನಾನು ಸಹ ಆತನಂತೆ ಕುಳಿತು ಸಂಕದ ಮೇಲೆ ಕಾಲಿಡುತ್ತಿದ್ದಂತೆ ಅದು ಶಬ್ದ ಮಾಡುತ್ತಾ ಮುರಿದು ಬಿತ್ತು. ಶರತ್ ನ ಅದೃಷ್ಟ ಚೆನ್ನಾಗಿತ್ತು ಅನ್ನಿಸುತ್ತೆ. ನೀರು ಹತ್ತು, ಹನ್ನೆರಡು ಅಡಿ ಆಳದಲ್ಲಿ ಹರಿಯುತ್ತಿತ್ತು. ಇವನೆನಾದರು ಬಿದ್ದಿದ್ದರೆ ಬೆನ್ನು, ಕೈ ಕಾಲು ಮುರಿದುಕೊಳುತ್ತಿದ್ದಿದ್ದು ಖಚಿತವ...