Friday, October 30, 2009

ನಮ್ಮ ಸಾಹಸ ಯಾತ್ರೆ - ಭಾಗ -೯ - ನದಿಯ ಕಡೆಗೆ

ಎಲ್ಲರೂ ಹೊಸ ಹುರುಪಿನಿಂದ ಘಟ್ಟ ಇಳಿಯತೊಡಗಿದೆವು. ಘಟ್ಟ ಬಹಳ ಕಡಿದಾಗಿತ್ತು. ನಾನು ಶೂ ಹಾಕಿಕೊಂಡು ಬಂದಿದ್ದರಿಂದ ತೊಂದರೆ ಇರಲ್ಲಿಲ್ಲ. ಉಳಿದ ಮೂವರು ಚಪ್ಪಲಿಗಳನ್ನು ಕೈ ಯಲ್ಲಿ ಹಿಡಿದುಕೊಂಡು ದೇಹದ ಬಲವನ್ನು ನಿಯಂತ್ರಿಸುತ್ತಾ ಇಳಿಯುತ್ತಿದ್ದರು. ಸಾಮಾನುಗಳನ್ನೆಲ್ಲ ಹೆಗಲಿಗೆ ನೇತು ಹಾಕಿಕೊಂಡಿದ್ದೆವು. ಘಟ್ಟ ಇಳಿಯುತ್ತಾ ಹೋಗುತ್ತಿದ್ದಂತೆ ಕಾಡು ಮತ್ತೆ ದಟ್ಟವಾಗತೊಡಗಿತು. ಕಡಿದಾದ ಭಾಗವೆಲ್ಲಾ ಮುಗಿದೊಡನೆ ವಿಶ್ರಾಂತಿ ತೆಗೆದುಕೊಂಡೆವು. ಈಗ ಅನೇಕ ಜಾತಿಯ ಪ್ರಾಣಿ, ಪಕ್ಷಿಗಳು ಕಣ್ಣಿಗೆ ಬೀಳತೊಡಗಿದವು. ಕಾಡೊಳಗೆ ತುಂಬ ತಂಪಿತ್ತು. ನಾವೆಲ್ಲಾ ಹೀಗೆ ಕುಳಿತಿರುವಾಗ ಒಂದು ಮುಂಗಸಿ ದೂರದಲ್ಲಿ ಬರುವುದು ಕಾಣಿಸಿತು. ನಾವೆಲ್ಲರೂ ಸುಮ್ಮನೆ ಕುಳಿತು ಗಮನಿಸತೊಡಗಿದೆವು. ಅದಕ್ಕೆ ನಾವಿರುವುದು ತಿಳಿಯಿತು ಅಂತ ಅನ್ನಿಸುತ್ತೆ , ಮಿಂಚಿನಂತೆ ಯಾವುದೊ ಪೊದೆಯೊಳಗೆ ನುಗ್ಗಿತು. ನಂತರ ನಾವು ಮತ್ತೆ ಹೊರಟೆವು. ಈ ಭಾರಿ ನಾವು ಒಂದು ಕಪಿ ಸಮೂಹವನ್ನು ಎದುರುಗೊಂದೆವು. ಇದು ಕಪ್ಪು ಮೂತಿ ಮುಸಿಯವಾಗಿತ್ತು. ಅವೆಲ್ಲ ನಮ್ಮನ್ನು ಕಂಡು ಮರ ಏರಿ ಕುಳಿತವು. ಸಂಜೆಯಾಗುತ್ತಿದ್ದಂತೆ ದೂರದಲ್ಲೆಲ್ಲೋ ನವಿಲುಗಳ ಕೂಗಾಟ ಕೇಳಿತು. ಮಲೆನಾಡಿನಲ್ಲಿ ನವಿಳುಗಲೇನು ಅಪರೂಪವಲ್ಲ.

ನಾವು ಮುಂದುವರೆಯುತ್ತಿದ್ದಂತೆ ನಾವು ಹೋದದ್ದೇ ದಾರಿಯಾಯಿತು. ಒಮ್ಮೊಮ್ಮೆ ಕಾಡು ಎಷ್ಟು ಅಭೆದ್ಯವಾಗಿತ್ತೆಂದರೆ ನಾವು ಯಾವುದ್ಯಾವುದೋ ಕಾಡು ಪ್ರಾಣಿಗಳು ಮಾಡಿದ್ದ ದಾರಿಯಲ್ಲಿ ನುಸಿದು ಹೋಗುವ ಪರಿಸ್ಥಿತಿ ಬಂತು. ಸ್ವಲ್ಪ ದೂರ ಹೋಗುತ್ತಿದ್ದಂತೆ ದೂರದಲ್ಲೆಲ್ಲೋ ನಾಯಿಗಳ ಬೊಗಳುವಿಕೆ ಕೇಳಿಸಿತು. ಇದರಿಂದ ಹತ್ತಿರದಲ್ಲೆಲ್ಲೋ ಜನ ವಸತಿಯಿದೆ ಎಂದು ಅರ್ಥವಾಯಿತು. ಅಂತೂ ದಟ್ಟವಾದ ಕಾಡು ಮುಗಿದು ಬಯಲು ಎದುರಾಯಿತು. ಬಯಲಿನ ಆಚೆ ತುದಿಯಲ್ಲಿ ಒಂದು ಗುಡಿಸಲು ಇತ್ತು. ನಾವು ಅದನ್ನು ಸಮೀಪಿಸುತ್ತಿದ್ದಂತೆ ಒಂದು ಕಂತ್ರಿ ನಾಯಿ ವಿಪರೀತ ಗಲಾಟೆ ಎಬ್ಬಿಸಿತು. ಅದನ್ನು ಕೇಳಿ ಆ ಗುಡಿಸಲಿನ ಯಜಮಾನ ಹೊರಕ್ಕೆ ಬಂದ. ಆತ ಕಟ್ಟು ಮಸ್ತಗಿದ್ದು ಶ್ರಮಜೀವಿಯ ಹಾಗೆ ಕಂಡು ಬಂದ. ಆತನ ಸೊಂಟದಲ್ಲಿದ್ದ ಲಂಗೋಟಿ ಬಿಟ್ಟರೆ ಮೈ ಮೇಲೆ ಇನ್ನ್ಯಾವುದೇ ವಸ್ತ್ರವಿರಲ್ಲಿಲ್ಲ. ನಮ್ಮನ್ನು ನೋಡಿ ಯಾರು? ಎಂದು ಕೇಳಿದ. ಆ ನಾಯಿಯ ಗಲಾಟೆಯಲ್ಲಿ ನಮಗೆ ಆತ ಹೇಳಿದ್ದು ಕೇಳಿಸಲ್ಲಿಲ್ಲ. ಕೊನೆಗೆ ನಾಯಿಯನ್ನು ಓಡಿಸಿ ಮತ್ತೆ ಪ್ರಶ್ನಿಸಿದ. ನಾವು ನದಿ ನೋಡ ಬಂದವರೆಂದು. ನಮಗೆ ಸ್ವಲ್ಪ ನೀರಿದ್ದರೆ ಕೊಡಬೇಕೆಂದು ಕೇಳಿದೆವು. ಆತ ನೀರು ತಂದು ಕೊಡುತ್ತಾ ರಾತ್ರಿ ಎಲ್ಲಿ ಉಳಿಯುತ್ತೀರಿ ಎಂದು ಕೇಳಿದ. ನಾವು ಅಜ್ಜ ತಿಳಿಸಿದ ಮನೆಯವರ ಬಗ್ಗೆ ಹೇಳಿದೆವು. ಆತ ನಾವು ದಿಕ್ಕು ತಪ್ಪಿ ಬಂದಿದ್ದೇವೆಂದು ಅವರ ಮನೆಗೆ ಹೋಗಲು ನಾವಿಳಿದ ಘಟ್ಟದ ಪಕ್ಕದ ಘಟ್ಟದಿಂದ ಇಳಿಯಬೇಕ್ಕಿತ್ತೆಂದು ತಿಳಿಸಿದ. ಅಲ್ಲಿಗೆ ಈಗ ಹೋಗಬಹುದೇ ಎಂದು ವಿಚಾರಿಸಿದಾಗ ಹೋಗಬಹುದೆಂದು, ಆದರೆ ಮದ್ಯೆ ಕಾಡು ದಾಟಬೇಕಾಗುತ್ತದೆ, ಕನಿಷ್ಠ ಒಂದು ಗಂಟೆ ಬೇಕಾಗುತ್ತದೆ ಎಂದು ಹೇಳಿದ. ನಮ್ಮ ಬಳಿ ಹೆಚ್ಚು ಸಮಯವಿರಲ್ಲಿಲ್ಲ. ಕತ್ತಲಾಗುವುದಕ್ಕಿಂತ ಮೊದಲು ಅಲ್ಲಿಗೆ ಹೋಗಿ ತಲಪಬೇಕೆಂದು ಎದ್ದೆ. ಆತನ ಮನೆಯ ಸುತ್ತ ಹಾವು, ಮುಂಗಸಿ ಇತ್ಯಾದಿ ಪ್ರಾಣಿಗಳ ಚರ್ಮ ನೇತು ಹಾಕಿದ್ದ. ಅಲ್ಲೇ ಹತ್ತಿರದಲ್ಲಿ ಮೊಲ ಹಿಡಿಯುವ ಬೋನಿತ್ತು. ರಾಘು ಅದನ್ನು ಕಂಡು ಸಿಟ್ಟಿಗೆದ್ದು ಆತನಿಗೆ ಪ್ರಾಣಿ, ಪಕ್ಷಿಗಳ ಬಗ್ಗೆ ಉಪದೇಶ ಪ್ರಾರಂಬಿಸಿದ. ನಾನು ಕೊನೆಗೆ ಕಟ್ಟಲಾಗುತ್ತದೆ ಎಂದು ಆತನನ್ನು ಎಬ್ಬಿಸಿಕೊಂಡು ಹೊರಡಬೇಕಾಯಿತು. ಆ ಮನುಷ್ಯ ನಾವೀಗ ಹೋಗಕೂಡದೆಂದು ಕತ್ತಲಲ್ಲಿ ಹಾವು, ಹರಣೆ ಇರುತ್ತದೆ ಎಂದ. ನಮಗೆ ಹೊರಡದೆ ಗತ್ಯಂತರವಿರಲ್ಲಿಲ್ಲ. ಆತನ ಮನೆಯಲ್ಲಿ ಉಳಿಯುವುದು ಸಾದ್ಯವೇ ಇರಲ್ಲಿಲ್ಲ. ಸತ್ತ ಪ್ರಾಣಿಗಳ ನಾತ ಮನೆ ತುಂಬ ಹರಡಿತ್ತು. ಅದ್ದರಿಂದ ದೃಡ ಮನಸ್ಸು ಮಾಡಿ ಹೊರಟೆ ಬಿಟ್ಟೆವು. ಕೊನೆಗೆ ನಮ್ಮ ಈ ನಿರ್ಧಾರ ಎಷ್ಟು ಅಪಾಯಕಾರಿಯಾಗಿತ್ತು ಎಂಬುದನ್ನೂ ಮನಗೊಂಡೆವು .

ಮುಂದಿನ ಭಾಗದಲ್ಲಿ - ಕೈ ಕೊಟ್ಟ ಸಂಕ.

No comments:

Post a Comment