Saturday, October 31, 2009

ನಮ್ಮ ಸಾಹಸ ಯಾತ್ರೆ - ಭಾಗ -೧೦ - ಕೈ ಕೊಟ್ಟ ಸಂಕ



ನಾವು ಅವನ ಗುಡಿಸಲಿಂದ ಹೊರಟಾಗ ಐದು ಕಾಲಾಗಿತ್ತು. ಬೇಗ ಅವರ ಮನೆ ತಲುಪಲು ಜೋರಾಗಿ ನಡೆಯುತ್ತಿದ್ದೆವು. ಅರುಣ ನಮ್ಮ ಜೊತೆ ನಡೆಯಲಾರದೆ ಓದಿ ಬರುತ್ತಿದ್ದ. ಕಾಡು ಮೊದಲಿನಷ್ಟು ದಟ್ಟವಲ್ಲದ್ದಿದ್ದರೂಕಾಲು ದಾರಿಯೇನು ಇರಲ್ಲಿಲ್ಲ. ನಾವು ಹೋಗಿದ್ದೆ ದಾರಿಯಾಗಿತ್ತು. ಬಹುಶಃ ಮಳೆಗಾಲದ ನಂತರ ಕಾಲು ದಾರಿ ಮುಚ್ಚಿ ಹೋಗಿರಬೇಕು. ಆತನ ಮನೆಯಿಂದ ಸ್ವಲ್ಪ ದೂರ ಕಾಲು ದಾರಿ ಇತ್ತಷ್ಟೇ. ನಾವೆಲ್ಲಿ ದಿಕ್ಕು ತಪ್ಪಿ ಕಾಡು ಪಾಲಾಗುತ್ತೆವೋ ಎಂದು ಹೆದರಿಕೆ ಯಾಯಿತು. ಅಷ್ಟರಲ್ಲಿ ಒಂದು ಹೊಳೆ ಹರಿಯುತ್ತಿರುವ ಶಬ್ದ ಕೇಳಿ ಬಂತು. ಸ್ವಲ್ಪ ಹೊತ್ತಿನ ನಂತರ ಒಂದು ಚಿಕ್ಕ ಹಳ್ಳ ನಮಗೆ ಎದುರಾಯಿತು. ನಾವು ಒಟ್ಟು ಹೇಗೋ ನಡೆದು ಬಂದಿದ್ದರೂ ಹೆಚ್ಚು ಕಡಿಮೆ ಸರಿ ದಾರಿಗೆ ಬಂದಿದ್ದೆವು. ಏಕೆಂದರೆ ಸ್ವಲ್ಪ ದೂರದಲ್ಲಿಯೇ ಹಳ್ಳ ದಾಟಲು ಹಾಕಿದ್ದ ಸಂಕ ಕಾಣಿಸಿತು. ನಾವು ಅದರ ಬಳಿ ಹೋಗಿ ನೋಡಿದರೆ ಎರಡು ಮರಗಳನ್ನು ಉದ್ದಕ್ಕೆ ಹಾಸಿದ್ದರು. ನಾನು ನಿದಾನ ಒಬ್ಬೊಬ್ಬರಾಗಿ ದಾಟಬೇಕೆಂದು ಹೇಳಿದೆ. ಮೊದಲು ತಾನು ದಾಟುತ್ತೆನೆಂದು ಶರತ್ ಬಂದ. ಆತ ನಿದಾನ ಕೂತುಕೊಂಡು ತೆವಳುತ್ತ ದಾಟಿದ. ನಾನು ಸಹ ಆತನಂತೆ ಕುಳಿತು ಸಂಕದ ಮೇಲೆ ಕಾಲಿಡುತ್ತಿದ್ದಂತೆ ಅದು ಶಬ್ದ ಮಾಡುತ್ತಾ ಮುರಿದು ಬಿತ್ತು. ಶರತ್ ನ ಅದೃಷ್ಟ ಚೆನ್ನಾಗಿತ್ತು ಅನ್ನಿಸುತ್ತೆ. ನೀರು ಹತ್ತು, ಹನ್ನೆರಡು ಅಡಿ ಆಳದಲ್ಲಿ ಹರಿಯುತ್ತಿತ್ತು. ಇವನೆನಾದರು ಬಿದ್ದಿದ್ದರೆ ಬೆನ್ನು, ಕೈ ಕಾಲು ಮುರಿದುಕೊಳುತ್ತಿದ್ದಿದ್ದು ಖಚಿತವಾಗಿತ್ತು. ಸಮಯ ಬೇರೆ ಜಾರುತ್ತಿತ್ತು. ಹಕ್ಕಿಗಳೆಲ್ಲ ಗೂಡಿಗೆ ಹಿಂದಿರುಗುತ್ತಿದ್ದವು. ಈಗ ಹಳ್ಳ ಇಳಿದು ಹತ್ತುವುದೊಂದೇ ಅದನ್ನು ದಾಟಲು ಉಳಿದ ಮಾರ್ಗವಾಗಿತ್ತು. ನಾನು ಮೊದಲು ಅರುಣನನ್ನು ಇಳಿಸಿದೆ. ನಂತರ ರಾಘು ನನ್ನ ಕೈ ಹಿಡಿದುಕೊಂಡ. ನಾನು ನಿದಾನ ಇಳಿದೆ. ಅನಂತರದ ಸರದಿ ರಾಘುವಿನದ್ದಗಿತ್ತು. ಆತ ಯಾವುದೋ ಮರದ ಬೇರು ಹಿಡಿದು ಇಳಿಯಲು ಪ್ರಯತ್ನಿಸಿದ. ನಾನು ಆತನನ್ನು ಕೆಳಗಿನಿಂದ ಹಿಡಿದುಕೊಂಡೇ. ಆರದೆ ಒಮ್ಮೆಲೇ ಆತ ಕೈ ಜಾರಿ ಬಿದ್ದು ಬಿಟ್ಟ. ಅರ್ದ ಇಳಿದ್ದಿದ್ದರಿಂದ ಏನು ಪೆಟ್ಟಾಗದೆ ಬಚಾವಾದ. ಆತನ ಮೈ ಎಲ್ಲ ಒದ್ದೆಯಾಗಿತ್ತು. ಆ ದಾದಾ ಹತ್ತುವಷ್ಟರಲ್ಲಿ ಎಲ್ಲರೂ ಉಸ್ಸಪ್ಪ ಎಂದು ಕುಳಿತುಬಿಟ್ಟೆವು. ಹೀಗೆ ಕಾಲು ಗಂಟೆ ನಷ್ಟವಾಯಿತು. ಈಗ ಸೂರ್ಯ ಮೂರ್ತಿ ಮುಳುಗಿದ್ದ. ಕತ್ತಲೆ ನಿದಾನ ಆವರಿಸುತ್ತಿತ್ತು. ನಾವು ಕೈ ಕೊಟ್ಟ ಸಂಕವನ್ನೇ ಬೈಯುತ್ತ ಹೊರಟೆವು. ನಿಧಾನವಾಗಿ ಮರ ಗಿಡಗಳು ಮಸುಕಾಗತೊದಗಿದವು. ರಾತ್ರಿಯಲ್ಲಿ ಕೂಗುವ ಜೀರುಂಡೆಗಳು ತಮ್ಮ ಕೂಗನ್ನು ಪ್ರಾರಂಭಿಸಿದ್ದವು. ಅಷ್ಟರಲ್ಲಿ ರಾಘು ಸಣ್ಣದೊಂದು ಟಾರ್ಚ್ ತೆಗೆದ. ಅವನು ಸ್ಕೌಟ್ ನಲ್ಲಿದ್ದರಿಂದ ಕಾಡಿನಲ್ಲೆಲ್ಲ ಕ್ಯಾಂಪ್ ಮಾಡಿ ಅನುಭವ ಇತ್ತು. ಆದ್ದರಿಂದ ಸಾಮಾನ್ಯವಾಗಿ ಬೇಕಾಗುವ ಸಾಮಗ್ರಿಗಳನ್ನೆಲ್ಲಾ ತಂದಿದ್ದ. ಆ ಸಣ್ಣ ಟಾರ್ಚ್ ನಾಲ್ಕು ಜನಕ್ಕೆ ಯಾವ ರೀತಿಯಿಂದಲೂ ಸಾಲುತ್ತಿರಲ್ಲಿಲ್ಲ. ಆದರೂ ಹೇಗೋ ಹೆಜ್ಜೆ ಹಾಕಿದೆವು. ಒಮ್ಮೆಯಂತೂ ಒಂದು ಕಾಡು ಬೆಕ್ಕು ಅಡ್ಡ ಬಂದು ನಮ್ಮೆಲ್ಲರ ಭಯಕ್ಕೆ ಕಾರಣವಾಯಿತು. ಅದರ ಹೊಳೆಯುವ ಕಣ್ಣು ಕಂಡು ನಮಗೆ ಭಯವಾಗಿತ್ತು.


ಅಂತೂ ಇಂತೂ ಯಾವುದೋ ಜಾನುವಾರುಗಳು ಮಾಡಿಟ್ಟ ದಾರಿ ಎದುರಾಯಿತು. ಕಾಡು ಮುಗಿದು ತಣ್ಣನೆಯಾ ಗಾಳಿ ಮುಖಕ್ಕೆ ರಾಚಿತು. ನಾವೆಲ್ಲರೂ ನದಿ ಹತ್ತಿರ ಬಂತೆಂದು ಅಂದಾಜು ಮಾಡಿದೆವು. ಆದರೆ ನಾವು ನಡೆಯುತ್ತಿರುವ ದಾರಿಯು ಕೆಸರುಮಯವಾಗಿದ್ದು ನಮ್ಮ ಮೈ ಕೈ ಎಲ್ಲ ಕೆಸರಾಯಿತು. ನಂತರ ಒಂದು ಕಾಲುವೆಯನ್ನು ದಾಟಿದೆವು. ಕಾಲುವೆಯ ಪಕ್ಕದಲ್ಲೇ ಗದ್ದೆ ಇತ್ತು. ಗದ್ದೆಯ ಮೂಲಕ ಸಾಗುತ್ತಿದ್ದಾಗ ದೂರದಲ್ಲಿ ಮಿಣುಕು ದೀಪ ಕಂಡು ನಮಗೆ ಧೈರ್ಯ ತಂದು ಕೊಟ್ಟಿತು. ಇಷ್ಟು ಹೊತ್ತು ಯಾವುದೋ ಕ್ಷೋಭೆಗೆ ಒಳಗಾಗಿದ್ದ ಮನಸ್ಸು ಹಗುರವಾಯಿತು. ಕೊನೆಗೂ ಆ ಮನೆ ತಲುಪಿದೆವು. ಅದು ನಾವೆಣಿಸಿದಂತೆ ಅಜ್ಜ ಹೇಳಿದ ಮನೆ ಆಗಿತ್ತು. ಅವರು ನಮ್ಮ ಇತ್ಯೋಪಾಹಾರಿಗಳನ್ನು ವಿಚಾರಿಸಿ ಅಥಿತ್ಯಕ್ಕೆ ಮುಂದಾದರು. ಅವರ ಮನೆಗೆ ಎಲ್ಲೋ ಒಮ್ಮೊಮ್ಮೆ ಮಾತ್ರ ನೆಂಟರು ಬರುತ್ತಿದ್ದರು ಅನ್ನಿಸುತ್ತೆ. ರಾತ್ರೆ ಒಂಬತ್ತರವರೆಗೂ ಕೊರೆದರು. ಅರುಣ ಮಾತ್ರ ಯಾವ ಮುಲಾಜಿಲ್ಲದೆ ಪಕ್ಕದ ಗೋಡೆಗೆ ಒರಗಿ ನಿದ್ದೆ ಹೊಡೆದ. ನಂತರ ಆತನ್ನನ್ನು ಊಟಕ್ಕೆ ಎಬ್ಬಿಸಲಾಯಿತು. ನಮಗೆ ಹಸಿವಾಗಿದ್ದಕ್ಕೋ ಏನೋ ಊಟ ತುಂಬ ರುಚಿಸಿತು. ಅವರ ಹತ್ತು ವರ್ಷದ ಮಗ ನಮ್ಮ ಜೊತೆ ಬೇಗ ಸ್ನೇಹ ಬೆಳೆಸಿದ. ಆ ರಾತ್ರಿ ಆತ ನಮ್ಮ ಜೊತೆ ಮಲಗಿದ. ದೇಹ ತುಂಬ ದನಿದ್ದಿದ್ದರಿಂದ ಬೇಗ ನಿದ್ದೆ ಹತ್ತಿತು. ಅರುಣ ಮದ್ಯ ರಾತ್ರೆ ಒದೆಯುತ್ತಿದ್ದ. ಆಗ ಮಾತ್ರ ಒಂದೆರಡು ಭಾರಿ ಎಚ್ಚರವಾಗಿತ್ತು.



ಮುಂದಿನ ಭಾಗದಲ್ಲಿ : ನಿಗೂಡ ದ್ವೀಪ.

No comments:

Post a Comment