Thursday, October 22, 2009

ನಮ್ಮ ಸಾಹಸ ಯಾತ್ರೆ - ಮುದುಕನ ಕತೆ - ಭಾಗ ೧


ನನ್ನ ಅಜ್ಜನ ಮನೆ ಬೆಟ್ಟ, ಕಣಿವೆಗಳ ಮದ್ಯೆ ಇದೆ. ಸುತ್ತ ಮುತ್ತ ಸುಂದರ ಪರಿಸರ. ಮಳೆಗಾಲದಲ್ಲಂತೂ ಎಲ್ಲೆಲ್ಲೂ ಹಸಿರು ತುಂಬಿಕೊಂಡಿರುತ್ತದೆ. ನಾನು, ನನ್ನ ತಮ್ಮ ಇಬ್ಬರೂ ರಜೆ ಬಂತೆಂದರೆ ಅಜ್ಜನ ಮನೆಯಲ್ಲೇ ಇರುತ್ತೇವೆ. ನಮ್ಮಿಬ್ಬರಿಗೂ ಹೇಗೋ ಪರಿಸರದ ಮೇಲೆ ಪ್ರೀತಿ ಬೆಳೆದಿತ್ತು. ಕಾಡು, ಬೆಟ್ಟ ನಿಗೂದತೆಯ ಹಾಗೆ ಅನ್ನಿಸುತ್ತಿತ್ತು. ಪ್ರತಿಯೊಂದು ಪ್ರಾಣಿ, ಪಕ್ಷಿಗಳ ಬಗ್ಗೆಯೂ ಕುತೂಹಲ. ಈ ರೀತಿಯ ಹುಚ್ಚನ್ನು ಹತ್ತಿಸಿಕೊಂದವರಲ್ಲಿ ನನ್ನ ಆಪ್ತ ಸ್ನೇಹಿತ ರಾಘು ಕೂಡ ಒಬ್ಬ. ನಾವು ಮೂವರು ಎಲ್ಲಾದರೂ ಸುತ್ತುತ್ತಿರುತ್ತೇವೆ. ಈಗೀಗ ನಮ್ಮ ಜೊತೆ ಅರುಣ ಕೂಡ ಬರುತ್ತಾನೆ.

ನನ್ನ ಅಜ್ಜ ಒಬ್ಬ ಕೃಷಿಕರು. ಮಲೆನಾಡಿನಲ್ಲಿ ಆಗ ಕೃಷಿ ಮಾಡಲು ಅನೇಕ ಉಪಟಳ ಇರುತ್ತಿತ್ತು. ಬೆಳೆದ್ದಿದ್ದರಲ್ಲಿ ಅರ್ದ ಭಾಗ ಮಂಗ, ಹಂದಿ ತಿಂದುಕೊಂಡು ಹೋಗುತ್ತಿದವು. ಇನ್ನು ಕಾಡುಕೋಳಿ ಇತ್ದ್ಯಾದಿ ಪಕ್ಷಿಗಳು ಸಹಿತ ತೊಂದರೆ ಕೊಡುತ್ತಿದವು. ಇವುಗಳನ್ನು ಹೊಡೆಯಲು ಅಜ್ಜ ಒಂದು ಕೇಪಿನ ಕೋವಿ ಇಟ್ಟುಕೊಂಡಿದ್ದರು. ನಾವು ಬ್ರಾಹ್ಮಣ ರಾದ್ದರಿಂದ ಮಾಂಸ ತಿನ್ನುತಿರಲ್ಲಿಲ್ಲ. ಅಜ್ಜ ಹೊಡೆದ ಮಂಗನನ್ನೋ, ಕಾಡುಕೊಳಿಯನ್ನೋ ಹೊತ್ತೊಯಲು ಒಬ್ಬ ಇರುತ್ತಿದ್ದ. ಅಜ್ಜ ತುಂಬ ಕಷ್ಟ ಸಹಿುಗಳಗಿದ್ದರು ಆಗಿನ ಕಾಲದಲ್ಲಿ ಈಗಿನಂತೆ ಪಂಪ್ ಸೆಟ್ ಇತ್ಯಾದಿ ಇರುತ್ತಿರಲ್ಲಿಲ್ಲ. ಆಗ ಕಾಲುವೆಯಿಂದ ನೀರು ಹೊತ್ತು ತೋಟಕ್ಕೆ ಹೊತ್ತೊಯುತ್ತಿದ್ದುದನ್ನು ನಾನೇ ಸ್ವತಃ ಕಂಡಿದ್ದೇನೆ. ನಮಗೆ ಪರಿಸರದ ಮೇಲೆ ಆಸಕ್ತಿ ಮೂಡುವಲ್ಲಿ ಅಜ್ಜನೇ ಮುಖ್ಯ ಕಾರಣ.

No comments:

Post a Comment