ನಮ್ಮ ಸಾಹಸ ಯಾತ್ರೆ - ಭಾಗ ೫ - ನಮ್ಮ ನಿರ್ಧಾರ




ಈಗೀಗ ನಾನು, ಶರತ್, ರಾಘು ಮುರೂಜನವೂ ಒಟ್ಟಿಗೆ ಸೇರುವುದೇ ಕಷ್ಟವಾಗಿದೆ. ಮೂವರೂ ನಮ್ಮ ನಮ್ಮ ಓದು, ಜೀವನ ಎಂದು ಬೇಟಿಯಾಗುವುದೇ ಅಪರೂಪ. ಹಾಗಿದ್ದಾಗಲೂ ಕಳೆದ ಬಾರಿ ಮೂವರು ಒಂದು ಹದಿನೈದು ದಿನಗಳು ಸೇರುವ ಸಂದರ್ಭ ಒದಗಿತ್ತು.



ದಿನಾ ಮೂವರೂ ಕ್ರಿಕೆಟ್ ಆಡುವುದು, ಬೆಟ್ಟ ಸುತ್ತುವುದು ಮಾಡುತ್ತಿದ್ದೆವು. ನಮ್ಮ ಜೊತೆ ಅರುಣನೂ ಬರುತ್ತಿದ್ದ. ಒಂದು ದಿನ ರಾಘು ನಮ್ಮ ಮನೆಯಲ್ಲಿ ಉಳಿಯುವುದೆಂದು ನಿರ್ಧಾರವಾಯಿತು. ಮೊದಲ್ಲೆಲ್ಲಾ ಆತ ನಮ್ಮ ಮನೆಯಲ್ಲೊಂದಿು ದಿನ ನಾವು ಅವನ ಮನೆಯೋಲ್ಲೊಂದಿಷ್ಟು ದಿನ ಉಳಿಯುತ್ತಿದೆವು. ಅವರ ತೋಟಕ್ಕೆ ಹೋಗಿ ಗೇರು ಹಣ್ಣೋ, ಚಿಕ್ಕು ಹಣ್ಣೋ ತಿನ್ನುತ್ತಾ ಕೂರುತ್ತಿದ್ದೆವು. ಈಗ ಆ ಅಭ್ಯಾಸ ಬಿಟ್ಟು ಹೋಗಿತ್ತು. ಅವತ್ತು ಸಂಜೆ ನಾವು ನಾಲ್ವರೂ ಹತ್ತಿರದ ಗುಡ್ಡಕ್ಕೆ ಹೊರಟೆವು. ಅದು ಇದು ಮಾತನಾಡುತ್ತಾ ಗುಡ್ಡ ಹತ್ತಿದ್ದೇ ಗೊತ್ತಾಗಲ್ಲಿಲ್ಲ. ನಾನು, ರಾಘು ಇಬ್ಬರೂ ಗುಡ್ಡದಲ್ಲಿ ಹಳೆಯ ಘಟನೆಗಳನ್ನೆಲ್ಲ ನೆನಪಿಸಿಕೊಳ್ಳುತ್ತಿದ್ದೆವು. ಶರತ್, ಅರುಣ ಇಬ್ಬರೂ ಇಲ್ಲೇ ಕೆಳಗೆ ನೇರಳೆ ಮರ ಇದೆ. ಆ ಮರದಲ್ಲಿ ಹಣ್ಣಾಗಿದೆಯೆ ಎಂದು ನೋಡಿಕೊಂಡು ಬರುತ್ತೇವೆ ಅಂತ ಹೇಳಿ ಗುಡ್ಡವನ್ನು ಇಳಿಯತೊಡಗಿದರು. ಅದೊಂದು ಸುಂದರವಾದ ಸಂಜೆ. ತಣ್ಣಗೆ ಗಾಳಿ ಬೀಸುತ್ತಿತ್ತು. ಮುಗಿಲ್ಲೆಲ್ಲಾ ಸೂರ್ಯ ಮುಳುಗುತ್ತಿರುವ ಕಾರಣ ಕೆಂಪಾಗಿ ಕಾಣುತ್ತಿತ್ತು. ಸೂರ್ಯ ದೂರದ ಘಟ್ಟದ ಹಿಂದೆ ಜಾರುತ್ತಿದ್ದ. ನಾನು ನಮ್ಮ ಬಾಲ್ಯದ ನೆನಪುಗಳನ್ನು ಕೆದಕಿ ರಾಘುಗೆ ಹೇಳುತ್ತಿದ್ದೆ. ಆತನೂ ಆ ಕಾಲ ಮತ್ತೆ ಬಾರದೆಂದು ಕೊರಗುತ್ತಿದ್ದ. ಕೆಪ್ಪ ಸತ್ತು ಆಗಲೇ ಮೂರು ವರ್ಷಗಳಾಗಿತ್ತು. ಆತ ದೂರದಲ್ಲಿ ಕಾಣುವ ಘಟ್ಟದ ಬಗ್ಗೆ ಹೇಳಿದ ಕತೆ ನೆನಪಿಸಿದೆ.

Comments

Popular posts from this blog

ಚಳಿಗಾಲದ ಒಂದು ದಿನ !

rag picker boy

ಮುಪ್ಪು