Sunday, November 29, 2009

Munnar boats

ಇದೆ ತರ boat ಗಳ ಚಿತ್ರ ಈ ಹಿಂದೆ ಹಾಕಿದ್ದೆ. ಅದರ link

Wednesday, November 18, 2009

ನಮ್ಮ ಸಾಹಸ ಯಾತ್ರೆ - ಭಾಗ - ೧೪ - ಮನೆಯ ದಾರಿ

ನಾವು ಆ ದಿನವೇ ಮನೆಗೆ ಹಿಂದ್ಹಿರುಗುತ್ತೇವೆ ಎಂದು ಅವರಿಗೆ ತಿಳಿಸಿದೆವು. ಅವರ ತೀರ ಒತ್ತಾಯದಿಂದ ಒಂದು ದಿನವಿಡೀ ಅಲ್ಲಿ ಇರಬೇಕಾಗಿ ಬಂತು. ಸಂಜೆ ತಾನು ತಿರುಗಾಡಲು ಕರೆದುಕೊಂಡು ಹೋಗುತ್ತೇನೆಂದು ಅವರು ತಿಳಿಸಿದರು. ಮಧ್ಯಾನ ಒಂದು ನಿದ್ದೆ ತೆಗೆದ ಮೇಲೆ ಅವರ ಜೊತೆ ನಾವು ಹೊರಟೆವು. ಅರುಣ ತನ್ನ ಕೈಯಲ್ಲಿ ನಡೆಯಲು ಆಗುವುದಿಲ್ಲ ಎಂದು ಮನೆಯಲ್ಲೇ ಉಳಿದ. ನಮ್ಮ ಜೊತೆ ಬಂದವರ ಕೈಯಲ್ಲಿ ಬೆಣಚು ಕಲ್ಲಿನ ಉಂಡೆಯೊಂದಿತ್ತು. ನಾವು ಅದನ್ನು ಯಾಕೆ ಎಂದು ಕೇಳಿದಾಗ ಅದು ಹಂದಿಯನ್ನು ಸಾಯಿಸುವುದಕ್ಕೆ ಎಂದು ತಿಳಿಸಿದರು. ಆ ಉಂಡೆಯನ್ನು ಯಾವುದೋ ಬಾಲೆ ಗಿಡಕ್ಕೆ ಕಟ್ಟಿದರು. ಬಾಳೆಗಿಡ ಅಗೆಯಲು ಬಂದ ಹಂದಿ ಅದನ್ನೂ ಅಗೆದು ಉಂಡೆ ಸಿಡಿದು ಸ್ಥಳದಲ್ಲೇ ಸಾಯುತ್ತದೆಂದು ತಿಳಿಸಿದರು. ನಾವು ಕುತೂಹಲದಿಂದ ನೋಡಿದೆವು.
ಬರುತ್ತಾ ಅವರು ದೂರದಿಂದ ಕಾಟಿಗಳ ಗುಂಪೊಂದನ್ನು ತೋರಿಸಿದರು. ಗುಂಪಿನಲ್ಲಿರುವ ಕಾಡುಕೋಣ ಗಳಿಂದ ಯಾವುದೇ ಭಯವಿಲ್ಲವೆಂದೂ, ಒಂಟಿಯಾಗಿದ್ದರೆ ಮಾತ್ರ ಅಪಾಯವೆಂದೂ ತಿಳಿಸಿದರು. ಆ ರಾತ್ರೆಯಿಡಿ ನಮಗೆ ಕಾಡುಕೋಣದ್ದೇ ಕನಸು.
ಈ ದಿನ ಅರುಣನನ್ನು ನನ್ನ ಪಕ್ಕ ಮಲಗಿಸಿಕೊಳ್ಳದೆ ರಾಘುವಿನ ಬದಿಯಲ್ಲಿ ಮಲಗಿಸಿದೆ. ಆದರೆ ಅರುಣ ಒದ್ದರೂ ರಾಘುವಿಗೆ ಎಚ್ಹ್ಚ್ರವಾಗಲ್ಲಿಲ್ಲವಂತೆ. ರಾತ್ರೆ ಢಂ ಎಂದು ಶಬ್ದ ಕೇಳಿತು. ನಾನು ಹಂದಿ ಸತ್ತಿರಬಹುದು ಎಂದುಕೊಂಡು ಮಗ್ಗುಲಾಗಿ ಮಲಗಿದೆ.
ಬೆಳಗ್ಗೆ ಗಡದ್ದಾಗಿ ತಿಂಡಿ ತಿಂದುಕೊಂಡು ವಾಪಾಸು ಹೊರಟೆವು. ಹಿಂದಿನ ದಿನ ಮಂಕಾಗಿದ್ದ ಅರುಣ ಹುರುಪಿನಿಂದ ಹೊರಟ. ಅದನ್ನು ಕಂಡು ನನಗೆ ಸಂತೋಷವಾಯಿತು. ನಾನು ಮನೆಯವರಿಗೆ ತುಂಬು ಕೃತಜ್ಞತೆ ಅರ್ಪಿಸಿದೆವು. ಅವರು ಮುಂದಿನ ರಜಕ್ಕೆ ಮತ್ತೆ ಬರುವಂತೆ ಹೇಳಿದರು. ಅವರು ಸ್ವಲ್ಪ ದೂರ ಬಂದು ದಾರಿ ತೋರಿಸಿ ಬೀಳ್ಕೊಟ್ಟರು. ಅವರು ತೋರಿಸಿದ ದಾರಿ ನಮ್ಮನ್ನು ಘಟ್ಟಕ್ಕೆ ಕರೆದೊಯ್ಯಲಿತ್ತು. ದಾರಿಯ ಮದ್ಯೆ ನಮಗೆ ತಿನ್ನಲಿಕ್ಕೆ ಕುಟ್ಟವಲಕ್ಕಿ ಮಾಡಿ ಕೊಟ್ಟಿದ್ದರು. ಮದ್ಯೆ ದಾರಿಯಲ್ಲಿ ಹಂದಿ ಸತ್ತಿದೆಯೇ ಎಂದು ನೋಡಿದೆವು. ಅಲ್ಲೆಲ್ಲೂ ಕಾಡು ಹಂದಿಯ ಸುಳಿವಿರಲ್ಲಿಲ್ಲ. ಕೊನೆಗೆ ಒಂದು ಕಡೆ ಕಾಲುದಾರಿಯ ಪಕ್ಕ ಕಾಡು ಹಂದಿಯೊಂದು ಮುಸುಡು ಒಡೆದುಕೊಂಡು ಸತ್ತು ಬಿದ್ದಿತ್ತು. ಕುಟುಕು ಜೀವವನ್ನು ಹಿಡಿದುಕೊಂಡು ಇಷ್ಟು ದೂರ ಬಂದ ಹಂದಿ ನೋಡಿ ನಮಗೆ ಆಶ್ಚರ್ಯವಾಯಿತು.
ನಾವು ಘಟ್ಟವನ್ನು ಹತ್ತಿದಾಗ ಮಧ್ಯಾಹ್ನ ಎರಡು ಗಂಟೆ. ಈ ಭಾರಿ ನಾವು ಇಳಿದ್ದಿದ್ದ ಘಟ್ಟವಲ್ಲದೆ ಪಕ್ಕದ ಘಟ್ಟ ಹತ್ತಿದ್ದೆವು. ಈ ಘಟ್ಟ ದಲ್ಲಿ ಅಷ್ಟೊಂದು ನೆರಳಿಲ್ಲದಿದ್ದರಿಂದ ಘಟ್ಟದಿಂದ ಸ್ವಲ್ಪ ಕೆಳಗೆ ಹೋಗಿ ವಿಶ್ರಮಿಸಿಕೊಂಡೆವು. ಕುಟ್ಟ ವಲಕ್ಕಿ ಖಾಲಿಯಾದ ಮೇಲೆ ಮೂರು ಗಂಟೆ ಯವರೆಗೂ ನಾನು ನದಿಯ ಸೌಂದರ್ಯ ವನ್ನು ಆಸ್ವಾದಿಸಿದೆ. ಕೊನೆಗೆ ಮನೆಯತ್ತ ಸಾಗತೋಡಗಿದಂತೆ ಒಂದು ತರ ಖುಶಿಯಾಗತೊಡಗಿತು. ಯಾವುದೋ ಕಲ್ಪನಾ ಪ್ರಪಂಚದಿಂದ ವಾಸ್ತವದೆಡೆಗೆ ಬಂದಂತೆ ಅನಿಸಿತು. ಶರತ್ ಈ ಮದ್ಯೆ ಏನನ್ನೋ ಗುರುತಿಸಿದ. ಅದು ಮುಳ್ಳು ಹಂದಿಯ ಮುಳ್ಳಗಿತ್ತು. ಅದರ ಗಾತ್ರ ನೋಡಿ ನಾನು ಸೋಜಿಗ ಪಟ್ಟೆ.
ಬರುವಾಗ ನಾವು ಅಬ್ಬಿ ನೀರಿನ ಹಳ್ಳ ಗುರುತಿಸಿದೆವು. ಅದರ ತುಂಬಾ ಜರಿ ಗಿಡ ತುಂಬಿಕೊಂಡಿತ್ತು. ಅದರಿಂದ ನೀರು ಶುಧ್ಧವಾಗಿರುತ್ತದೆ ಎಂದು ಅಜ್ಜ ಆಮೇಲೆ ಹೇಳಿದರು. ನೇರವಾಗಿ ಘಟ್ಟ ಇಳಿದ ಮೇಲೆ ಒಂದು ಸಣ್ಣ ಗುಡ್ಡ ಸಿಗುತ್ತದೆ. ಅದನ್ನು ದಾಟಿದರೆ ನಮ್ಮ ಅಜ್ಜನ ಮನೆ. ಮನೆ ತಲಪುವಷ್ಟರಲ್ಲಿ ಸಂಜೆ ಆರೂ ಮುಕ್ಕಾಲು. ನಾವೆಲ್ಲರೂ ಸುಸ್ತಾಗಿದ್ದೆವು. ಬೇಗ ಊಟ ಮಡಿ ಮಲಗಿದೆವು. ರಾತ್ರೆಯಿಡಿ ಘಟ್ಟದ್ದೆ ಕನಸು !

ಮುಗಿಯಿತು.

Sunday, November 8, 2009

ನಮ್ಮ ಸಾಹಸ ಯಾತ್ರೆ - ಭಾಗ - ೧೩- ಗುಹೆಯಲ್ಲಿ ಒಂದು ರಾತ್ರಿ

ನಾವು ಗುಹೆ ಹೊಕ್ಕುತ್ತಿದ್ದಂತೆ ಅವಾಂತರವೊಂದು ಎದುರಾಯ್ತು. ಒಂದು ನರಿಯು ಆ ಗುಹೆಯಲ್ಲಿ ಮನೆ ಮಾಡಿಕೊಂಡಿತ್ತು ಅಂತ ಅನ್ನಿಸುತ್ತೆ. ಅದು ಸೀದಾ ನಮ್ಮ ಮೇಲೆ ಹಾರಿಕೊಂಡು ಹೊರಗೆ ಹೋಯಿತು. ಗುಹೆಲ್ಲಿ ನಾಲ್ಕು ಜನ ಕೂತು ಕೊಳ್ಳುವಷ್ಟು ಜಾಗ ಧಾರಾಳವಾಗಿತ್ತು . ನಾನು, ರಾಘು ರಾತ್ರಿಯಿಡೀ ಉರಿಸಲು ಕಟ್ಟಿಗೆಯನ್ನು ತರಲು ಹೋದೆವು. ಅದೃಷ್ಟವಶಾತ್ ರಾಘು ಮನೆಗೆ ಹಿಂದಿರುಗಿದ್ದವನು ತನ್ನ ಚೀಲ ತಂದಿದ್ದ. ಅವನ ಚೀಲದಲ್ಲಿ ಒಂದಿಷ್ಟು ಬಟ್ಟೆ, ಸೋಪು, ಬೆಂಕಿ ಪೊಟ್ಟಣ, ಟಾರ್ಚ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇತ್ಯಾದಿಗಳಿದ್ದವು. ಅವನು ಸ್ಕೌಟ್ ಸೇರಿದ್ದರಿಂದ ಇವುಗಳನ್ನೆಲ್ಲ ಆತ ಮೊದಲೇ ಇಟ್ಟುಕೊಂಡಿದ್ದ. ನಾವು ಒಂದಿಷ್ಟು ಕಾಡಿನ ಹನ್ನುಗನ್ನು, ಸಿಹಿ ಗೆಣೆಸನ್ನುಒಟ್ಟು ಮಾಡಿ ತಂದೆವು. ವಾಪಸು ಗುಹೆಗೆ ಬರುವಷ್ಟರಲ್ಲಿ ಕತ್ತಲಾಗಿತ್ತು. ಶರತ್, ಅರುಣ ಆ ಮನೆಯವರು ನಮ್ಮನ್ನು ಹುಡುಕ್ಕುತ್ತಿರಬಹುದೇ ಎಂದು ಮಾತನಾಡುತ್ತಿದ್ದರು. ರಾಘು ಅಗ್ಗಿಷ್ಟಿಕೆ ರೆಡಿ ಮಾಡಿದ. ನಾವೆಲ್ಲರೂ ಸುತ್ತಲೂ ಕುಳಿತು ಅದೂ, ಇದೂ ಮಾತನಾಡಿಕೊಂಡೆವು. ರಾಘು ತನ್ನ ಸ್ಕೌಟ್ ಜೀವನದ ಅನುಭವಗಳನ್ನು ತಿಳಿಸಿದ. ದೂರದಲ್ಲೆಲ್ಲೋ ನರಿ ಕೂಗುತ್ತಿತ್ತು. ನಾವು ಗೆಣೆಸನ್ನು ಬೇಯಿಸಿಕೊಂಡು ತಿಂದೆವು. ಅರುಣ ಸುಸ್ತಾಗಿ ಮಲಗಿ ಬಿಟ್ಟ. ನಾನು ಮೂವರು ಸರದಿ ಪ್ರಕಾರ ಬೆಂಕಿ ಉರಿಯುವಂತೆ ನೋಡಿಕೊಳ್ಳಬೇಕು ಎಂದು ನಿರ್ಧಾರವಾಯಿತು. ಮದ್ಯೆ ಬೆಂಕಿ, ಸುತ್ತಲೂ ನಾವು ನಾಲ್ವರು. ಎಲ್ಲರ ಮುಖದ ಮೇಲೆ ಬೆಂಕಿಯಾ ಬೆಳಕು ಕುಣಿಯುತ್ತಿತ್ತು. ನನಗೆ ನಾವು ಯಾವುದೋ ಹೊಸ ಪ್ರಪಂಚಕ್ಕೆ ಬಂದಂತೆ ಅನ್ನಿಸಿತು. ಈ ಲೋಕಕ್ಕೆ ನಮಗೆ ಇದ ಒಂದೇ ಒಂದು ಅರಿವು ಎಂದರೆ ದೂರದಲ್ಲೆಲ್ಲೋ ಕೂಗುತ್ತಿದ್ದ ಕಾಡಿನ ಹಕ್ಕಿ, ಜೀರುಂಡೆಗಳು. ಆ ರಾತ್ರೆಯನ್ನು ಮಾತ್ರ ನಾನೆಂದೂ ಮರೆಯಲಾರೆ.
ಬೆಳಗ್ಗೆ ಚಳಿಯಿಂದ ಎಚ್ಚರಾಯಿತು. ರಾತ್ರೆ ಶರತ್ ತನ್ನ ಸರದಿ ಬಂದಾಗ ನಿದ್ದೆ ತಡೆಯಲಾರದೆ ಮಲಗಿಬಿಟ್ಟಿದ್ದ. ಇನ್ನೂ ಬೆಳಕು ಮೂಡಿರಲ್ಲಿಲ್ಲಬೆಂಕಿ ನಂದಿ ಹೋಗಿ ಕೆಂಡ ಉಳಿದಿತ್ತು. ನಾನು ಕತ್ತಲಲ್ಲೇ ಬೆಂಕಿ ಪೊಟ್ಟಣ ಹುಡುಕಿ ಬೆಂಕಿ ರೆಡಿ ಮಾಡಿದೆ. ಸಮಯ ಇನ್ನು ಬೆಳಗ್ಗೆ ನಾಲ್ಕು ಐವತ್ತಾಗಿತ್ತು. ನಾನು ಮತ್ತೆ ಮಲಗಿದೆ. ಕೊನೆಗೆ ಎದ್ದಾಗ ಸಮಯ ಆರೂವರೆ. ರಾಘು ಆಗಲೇ ಎದ್ದಿದ್ದ. ನಾನು ಎದ್ದು ಮುಖ ತೊಳೆದುಕೊಂಡು ಬಂದೆ. ಸುಮಾರು ಎಂಟು ಗಂಟೆಗೆ ನಮ್ಮ ಪ್ರಯಾಣ ಶುರುವಾಯಿತು. ನಾವು ದ್ವೀಪದ ದಡದಲ್ಲೇ ನಡೆಯುತ್ತಿದ್ದಾಗ ದೋಣಿ ಸಿಕ್ಕಿತು. ನಮಗೆಲ್ಲ ತುಂಬ ಸಂತೋಷವಾಯಿತು. ಒಂದೊಮ್ಮೆ ದೋಣಿ ಸಿಗದೇ ಹೋದರೆ ನಮ್ಮ ಗತಿ ಏನು? ನಾವು ಈ ದ್ವೀಪದಲ್ಲೇ ಬಂದಿಯಾಗುವ ಸಾಧ್ಯತೆಯನ್ನು ನಾನು ರಾಘುವಿಗೆ ಹೇಳಿದ್ದೆ. ಆತ ಹಾಗೇನಾದರು ಆದ್ರೆ ತಾನು ಈಜಿಕೊಂಡು ಹೋಗಿ ದೋಣಿಗೆ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳುತ್ತಿದ್ದ. ಅಷ್ಟು ದೂರ ಈಜುವುದು ಅಸಾದ್ಯ ಎಂದು ನನ್ನ ಭಾವನೆಯಾಗಿತ್ತು. ಈಗ ದೋಣಿ ಸಿಕ್ಕಿದ್ದು ಈ ದುಸ್ವಪ್ನಗಲಿಗೆಲ್ಲಾ ಕೊನೆ ಒದಗಿಸಿತ್ತು.

ಈ ಮದ್ಯೆ ಶರತ್ ಒಂದು ಬಳ್ಳಿ ನೋಡಿ ಹಾವು ಎಂದು ಹೆದರಿದ್ದ. ಕೊನೆಗೆ ಅದನ್ನು ಹತ್ತಿರ ಹೋಗಿ ನೋಡುವಷ್ಟರಲ್ಲಿ ಅದು ಒಂದು ದೊಡ್ಡ ಬಲ್ಲಿಯಾಗಿದ್ದು ಮರದ ತುಂಡಿಗೆ ಸುತ್ತಿಕೊಂಡಿತ್ತು. ಮರದ ಬಳ್ಳಿಯನ್ನು ಎಸೆದು ಬಳ್ಳಿಯನ್ನು ತೆಗೆದುಕೊಂಡು ಬಂದೆವು. ವಾಪಸು ಬರುವಾಗ ನನಗೆ ಹಿಂದಿನಂತೆ ಭಯವೇನೂ ಆಗಲಿಲ್ಲಾ. ಅವರ ಮನೆಗೆ ಹೋದಾಗ ಅವರು ನಾವು ವಾಪಾಸು ಮನೆಗೆ ಹೋದೆವೆಂದು ಯೋಚಿಸಿದ್ದರಂತೆ. ರಾಘು ನಾವು ಕಾಡಿನಲ್ಲಿ ದಿಕ್ಕು ತಪ್ಪಿ ಉಳಿಯಬೇಕಾಯಿತೆಂದು ರೈಲು ಬಿಟ್ಟ.
ಮುಂದಿನ ಭಾಗದಲ್ಲಿ : ಮನೆಯ ದಾರಿ.

Friday, November 6, 2009

ನಮ್ಮ ಸಾಹಸ ಯಾತ್ರೆ - ಭಾಗ - ೧೨ - ಧರೆಯ ಅಂಚಿನಲ್ಲಿ

ನನಗೆ ಹಸಿವಾಗತೊಡಗಿತು. ನಾವೆಲ್ಲರೂ ಆಹಾರವನ್ನು ಹುಡುಕಿಕೊಂಡು ಹೊರಟೆವು. ಅನೇಕ ತರಹದ ಹಣ್ಣುಗಳು ಸಿಕ್ಕಿದವು. ರಾಘು ಬರುತ್ತಾ ಉಳಿದಿದ್ದ ಸೌತೆಕಾಯಿಗಳನ್ನು ತಂದಿದ್ದ. ಎಲ್ಲವನ್ನೂ ಮುಗಿಸಿದ ಮೇಲೆ ಸುಮ್ಮನೆ ತಿರುಗಲು ಹೊರಟೆವು. ಇದುವರೆಗೂ ಸುಮ್ಮನೆ ಬರುತ್ತಿದ್ದ ಅರುಣ ಈಗ ತಲೆ ಹರಟೆ ಶುರು ಮಾಡಿದ್ದ. ಕೊನೆಗೆ ಹೀಗೆಲ್ಲ ಮಾಡಿದರೆ ಇಲ್ಲೇ ಬಿಟ್ಟು ಹೋಗುತ್ತೇವೆ ಎಂದು ಹೆದರಿಸಿದೆ. ನಾವು ದ್ವೀಪದಲ್ಲೆಲ್ಲ ಸುತ್ತು ಹೊಡೆಯುತ್ತಿದ್ದಂತೆ ನಿಜವಾಗಿಯೂದಾರಿ ತಪ್ಪಿ ಬಿಟ್ಟೆವು. ನನಗಂತೂ ವಿಪರೀತ ಗಾಬರಿಯಾಯಿತು.
ಇದರ ಮದ್ಯೆ ನಮಗೊಂದು ಎತ್ತರ ಧರೆ ಎದುರಾಯಿತು. ರಾಘು ಈ ತರಹದ ಸಮಸ್ಯೆ ಅರಿತವ ನಿಧಾನಕ್ಕೆ ಹತ್ತಿದ. ಧರೆ ತೀರ ಕಡಿದಾಗಿರಲ್ಲಿಲ್ಲವಾದರೂ ಸಣ್ಣ ಸಣ್ಣ ಕಲ್ಲುಗಳಿಂದ ತುಂಬಿತ್ತು. ರಾಘು ಮೇಲೆ ಹತ್ತಿದವನು ಅಲ್ಲಿಂದ ಸಣ್ಣ ಬಳ್ಳಿಯನ್ನು ಇಳಿಸಿದ. ಅದು ನಮಗೆ ಆಧಾರಕ್ಕೆ ಯಾವ ರೀತಿಯಿಂದಲೂ ಸಾಲದಿದ್ದರೂ ಧೈರ್ಯ ಕೊಡಲು ಸಾಕಾಗಿತ್ತು. ನಾನು ಕೆಳಗೆ ಇದ್ದು ಅರುಣನನ್ನು ಹತ್ತಿಸಿದೆ. ನಂತರ ಶರತ್ ಹತ್ತತೊಡಗಿದ. ಆತನ ಭಾರಕ್ಕೆ ಆ ಬಳ್ಳಿ ಹರಿದು ಶರತ್ ಜಾರತೊಡಗಿದ. ನಾನು ತಕ್ಷಣ ಆತ ತೊಟ್ಟಿದ್ದ ಹವಾಯಿ ಚಪ್ಪಲಿಯನ್ನ ಕೆಳಗೆ ಎಸೆಯುವಂತೆ ಹೇಳಿದೆ. ಅವನು ಆಗಲೇ ಆ ಕೆಲಸ ಮಾಡುತ್ತಿದ್ದ. ಕೊನೆಗೆ ಹೇಗೋ ಮತ್ತೆ ಹತ್ತುವಷ್ಟರಲ್ಲಿ ಶರತ್ ನ ಮೈ ಕೈ ತರಚಿ ರಕ್ತ ಒಸರುತ್ತಿತ್ತು. ನಾನು ಭಯದಿಂದ ಹತ್ತಿದೆ. ರಾಘು ಶರತ್ ಗೆ ಪ್ರಥಮ ಚಿಕಿತ್ಸೆ ಅಂತ ಏನೇನೋ ಹಚ್ಹಿದ್ದ. ಅದು ಉರಿಯುತ್ತ್ಇತ್ತು ಅಂತ ಅನ್ನಿಸುತ್ತೆ, ಶರತ್ ನ ಮುಖ ನೋಡಿ ಅಂದುಕೊಂಡೆ. ಧರೆ ಹತ್ತಿದ ಮೇಲೆ ಅರುಣ ತನಗೆ ನಡೆಯಲು ಆಗುತ್ತಿಲ್ಲವೆಂದು ಹೇಳತೊಡಗಿದ. ಕೊನೆಗೆ ನಾವು ಅರ್ಧ ಗಂಟೆ ವಿಶ್ರಮಿಸಿಕೊಂಡೆವು. ಸಂಜೆಯಾಗುತ್ತಿದ್ದಂತೆ ನಾವು ನಿಲ್ಲಿಸಿ ಬಂದ ದೋಣಿಯೇ ಪತ್ತೆಯಾಗಲ್ಲಿಲ್ಲ. ದ್ವೀಪ ದೊಡ್ದದಾಗಿದ್ದುದ್ದರಿಂದ ಸದ್ಯಕ್ಕೆ ರಾತ್ರಿ ಉಳಿಯಲು ಆಸರೆ ಹುಡುಕಬೇಕಿತ್ತು. ಶರತ್, ಅರುಣ nadiya daDadalli ಸುಮ್ಮನೆ ಕಲ್ಲು ಹೊಡೆಯುತ್ತ ಕುಳಿತುಕೊಂಡರು. ನಾನು, ರಾಘು ನಾವು ಯಾವ ಕಡೆಯಿಂದ ಬಂದಿರಬಹುದು ಎಂದು ಯೋಚಿಸತೊಡಗಿದೆವು. ಕೊನೆಗೆ ನದಿಯ ತೀರದಲ್ಲೇ ದ್ವೀಪವನ್ನು ಸುತ್ತು ಹೊಡೆದರೆ ದೋಣಿ ಕಾಣಬಹುದು ಎಂದು ನಿರ್ಧಾರವಾಯಿತು. ಆದರೆ ಈಗಲೇ ಕತ್ತಲೆಯಾಗುತ್ತ ಬಂದಿರುವುದರಿಂದ adu ಅಸಾಧ್ಯವೆಂದು ರಾಘು ಹೇಳಿದ. ಆದ್ದರಿಂದ ನಾವು ಇರಲು ಯಾವುದಾದರು ಆಸರೆ ಸಿಗುತ್ತದೋ ಎಂದು ಹುಡುಕಿ ಹೊರಟೆವು. ಅಂತೂ ಸಂಜೆಯಾಗಿ ಕತ್ತಲು ಮುಸುಕುವ ಮೊದಲು ನಾವೊಂದು ಗುಹೆ ಹುಡುಕಿದೆವು.

ಮುಂದಿನ ಭಾಗದಲ್ಲಿ - ಗುಹೆಯಲ್ಲಿ ಒಂದು ರಾತ್ರಿ

Monday, November 2, 2009

ನಮ್ಮ ಸಾಹಸ ಯಾತ್ರೆ - ಭಾಗ -೧೧ - ನಿಗೂಡ ದ್ವೀಪ

ಬೆಳಗ್ಗೆ ಏಳು ಗಂಟೆಗೆ ಎಚ್ಚರವಾಯಿತು. ಶರತ್, ರಾಘು ಆಗಲೇ ಎದಿದ್ದರು. ಎದ್ದ ಮೇಲೆ ಮನೆಯ ವಿವರಗಳನ್ನೆಲ್ಲ ನೋಡಿದೆ. ಬಹಳ ಸುಂದರವಾದ ಹಳೆಯ ಕಾಲದ ಮನೆಯಾಗಿತ್ತು. ಮಲೆನಾಡಿನಲ್ಲಿ ಸಾಮಾನ್ಯವಾಗಿ ಕಂಡು ಬಂದಂತಹದೇ ಆಗಿತ್ತು. ಆ ಮನೆಯಲ್ಲಿ ನಾಲ್ಕು ಜನ ವಾಸವಾಗಿದ್ದರು. ಗಂಡ, ಹೆಂಡತಿ, ಮಗು ಹಾಗು ಒಂದು ಮುದುಕಿ ಇದ್ದರು. ಮುದುಕಿಗೆ ಬಹುಶಃ ಎಂಬತ್ತೈದರ ವಯಸ್ಸು. ಆಕೆ ನಮ್ಮ ಅಜ್ಜ ಅವರನ್ನ ವಿಚಾರಿಸಿದರು.

ಅಷ್ಟರಲ್ಲಿ ತಿಂಡಿ ತಯಾರಾಗಿತ್ತು. ದೋಸೆಯ ಜೊತೆ ನೆಂಜಿಕೊಳ್ಳಲು ಜೇನುತುಪ್ಪ ಬಹಳ ಸೊಗಸಾಗಿತ್ತು. ಅವರ ಮನೆಯಿಂದ ದೂರದಲ್ಲಿ ನದಿ ಕಾಣುತ್ತಿತ್ತು. ನಾವು ಬೆಳಗ್ಗೆ ಬಿಸಿಲು ಬಿದ್ದ ಮೇಲೆ ಸ್ನಾನಕ್ಕೆಂದು ನದಿಯ ಕಡೆಗೆ ಹೋದೆವು ಮಳೆಗಾಲದಲ್ಲಾದರೆ ಇನ್ನೂ ಹತ್ತು ಅಡಿ ಜಾಸ್ತಿ ದೂರ ನೀರು ಬರುತ್ತಿತ್ತು ಅಂತ ಅನ್ನಿಸುತ್ತೆ. ಸ್ವಲ್ಪ ದೂರ ಬಂಡೆಗಳಿದ್ದವು ನಂತರ ಸ್ವಲ್ಪ ಅಳವಿರುವ ಸ್ಥಳ ಇತ್ತು. ನೀರು ಮಳೆಗಾಲದ ಮಣ್ಣು ನೀರಾಗಿರದೆ ಸ್ವಚ್ಚವಾಗಿತ್ತು. ಆದರೆ ನೀರಿಗಿಳಿದ್ದಿದ್ದೆ ಥರ ಥರ ನಡುಗುವಷ್ಟು ಶೀತ ಇತ್ತು. ಅರುಣ, ನಾನು ಈಜು ಬಾರದವರು ಸುಮ್ಮನೆ ನೀರಲ್ಲಿ ಆಟ ಆಡುತ್ತಿದ್ದೆವು. ಶರತ್, ರಘು ಈಜು ಹೊಡೆಯುತ್ತಿದ್ದರು. ಸ್ವಲ್ಪ ಹೊತ್ತಾದ ಮೇಲೆ ಒದ್ದೆ ಟವೆಲ್ ಬಂದೆ ಮೇಲೆ ಒಣಗಿಸಿ ಹಾಗೆಯೇ ಬಿಸಿಲ್ಲಲ್ಲಿ ಬಿದ್ದುಕೊಂಡೆ. ರಾಘು ನನ್ನ ಮೇಲೆ ತಣ್ಣೀರು ಹಾಕಿ ಎಬ್ಬಿಸಿದ. ಆಟ ನಾವು ದೂರದಲ್ಲಿ ಕಾಣುವ ದ್ವೀಪಕ್ಕೆ ಹೋಗೋಣ ಎಂದು ಕೇಳುತ್ತಿದ್ದ. ನಾನು ಹೇಗೆಂದು ಕೇಳಿದಾಗ ತಾನು, ಶರತ್ ಒಂದು ದೋಣಿಯನ್ನು ಪತ್ತೆ ಮಾಡಿದ್ದೆವೆಂದೂ, ಅದರಲ್ಲಿ ನಾಲ್ವರೂ ಹೋಗಬಹುದೆಂದು ಹೇಳಿದ. ಆದರೆ ಈಜು ಬಾರದ ನನಗೆ ದೋಣಿ ಅಕಸ್ಮಾತ್ ಮಗಚಿದರೆ ಏನು ಗತಿ ಎಂದು ಭಯವಾಯಿತು.
ಕೊನೆಗೆ ಅರುಣ ಕೂಡ ಒಪ್ಪಿಕೊಂಡು ಕುಣಿಯುತ್ತಿದ್ದದ್ದರಿಂದ ನಾನು ಒಪ್ಪಿಕೊಳ್ಳಬೇಕಾಯಿತು. ಆದರೆ ನಾವು ಆ ಮನೆಯವರಿಗೆ ತಿಳಿಸದೇ ಬರುವ ಹಾಗಿರಲ್ಲಿಲ್ಲ. ಮುಂದಾಳತ್ವ ವಹಿಸಿದ ರಾಘು ತಾನು ಹೇಳಿ ಬರುತ್ತೇನೆಂದು ಹೊರಟ. ಇಲ್ಲದ್ದಿದ್ದರೆ ಅವರು ಊಟಕ್ಕೆ ನಮ್ಮನ್ನು ಕಾಯುತ್ತಿದ್ದರು. ಕೊನೆಗೆ ನಾವು ಹೊರತ್ತದ್ದಾಯಿತು. ನಾನು ರಾಘು ಹುಟ್ಟು ಹಾಕುತ್ತಿದ್ದೆವು. ಅರುಣ ನೀರಿಗೆ ಕೈ ಇಳಿಬಿಟ್ಟು ಆಟವಾಡುತ್ತಿದ್ದ. ಶರತ್, ಅರುಣ ಇಬ್ಬರೂ ಮದ್ಯೆ ಕೂತಿದ್ದರು. ಅಂತಾ ಸೆಳೆತವೇನೂ ಇರದ್ದಿದ್ದರೂ ನನಗೆ ನದಿಯ ಮದ್ಯೆ ಹೋಗುವಷ್ಟರಲ್ಲಿ ವಿಪರೀತ ಗಾಭರಿಯಾಯಿತು. ನನ್ನೊಬ್ಬನನ್ನು ಬಿಟ್ಟು ಉಳಿದ ಮೂವರು ನಿಶ್ಚಿಂತೆಯಿಂದ ಇದ್ದರು. ನಾನು ಆ ಮನೆಯವರು ಹೇಗೆ ಒಪ್ಪಿಗೆ ಕೊಟ್ಟರು ಎಂದು ಆಶರ್ಯ ದಲ್ಲಿದ್ದೆ. ಕೊನೆಗೆ ಆತನ್ನನ್ನು ಕೇಳಿದಾಗ ಆತ ನಾವು ದ್ವೀಪಕ್ಕೆ ಹೋಗುವ ಬಗ್ಗೆ ಅವರಿಗೆ ತಿಳಿಸಿರಲೇ ಇಲ್ಲ! ತಾವು ಕಾಡು ತಿರುಗಲು ಹೋಗುತ್ತೇವೆ ಆದ್ದರಿಂದ ಮಧ್ಯಾಹ್ನದ ಊಟಕ್ಕೆ ಬರಲ್ಲಗುವುದಿಲ್ಲ ಅಂತ ಅಷ್ಟೆ ಹೇಳಿದ್ದ. ನಾನು ಕೆಪ್ಪ ಹೇಳಿದ್ದ ದ್ವೀಪವೇ ಇದಾಗಿರಬಹುದು ಎಂದು ಆಲೋಚಿಸುತ್ತಾ ಅಲ್ಲಿರಬಹುದಾದ ಭೂತ, ನಿಗೂಡತೆಯ ಬಗ್ಗೆ ಚಿಂತಿಸುತ್ತಿದ್ದೆ. ಕೊನೆಗೆ ಅರ್ದ ಗಂಟೆ ಹುಟ್ಟು ಹಾಕಿದ ಮೇಲೆ ನಾವು ದ್ವೀಪವನ್ನು ತಲುಪಿದೆವು.
ದ್ವೀಪದ ಹೊರಗೆಲ್ಲಾ ಜಿಗ್ಗು, ಪೊದೆ ಬೆಳೆದುಕೊಂಡಿದ್ದರೂ ದ್ವೀಪದ ಮದ್ಯೆ ಹೋಗುತ್ತಿದ್ದಂತೆ ಪಾಲು ಬಿದ್ದ ಮನೆಗಳು ಕಂಡು ಬಂದವು. ಮದ್ಯೆ ಕೆರೆಯನ್ತಿರುವ ಯಾವುದೋ ಹೊಂಡ ಕಂಡು ಬಂತು. ಇವುಗಳನ್ನು ಬಿಟ್ಟರೆ ಇನ್ನ್ಯಾವುದೇ ವಿಶೇಷ ಕಂಡು ಬರಲ್ಲಿಲ್ಲ.