
Every other scene in malnad (Western Ghats, Karnataka) inspires me a lot for painting. Predominantly cool colors depicts the cool morning atmosphere around this village temple.
ಕುಟುಂಬದಲ್ಲಿ ಸಾವಾದರೆ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ನನ್ನ ಅಪ್ಪ ಆರೋಗ್ಯವಗಿದ್ದವರು ಇದ್ದಕ್ಕಿದ್ದಂತೆ ಹೋಗಿಬಿಟ್ಟರು. ಅವರನ್ನು ಸಾವಿನ ದವಡೆಯಿಂದ ಪಾರು ಮಾಡಲು ಯಾವ ಡಾಕ್ಟರ್ ಗೂ ಆಗಲಿಲ್ಲಾ. ತೀರ ನೋವು ಪಟ್ಟು ಹೋಗಲ್ಲಿಲ್ಲ ಅನ್ನುವುದೊಂದೇ ಸಮಾದಾನ. ಇದೆಲ್ಲ ಒಂದು ದುಸ್ವಪ್ನದ ಹಾಗೆ ಕಾಣುತ್ತಿದೆ. ತೀರ ಹತ್ತಿರದವರಾದವರಿಗಂತೂ ಆ ನೋವು ತುಂಬಾ ದಿನಗಳವರೆಗೆ ಉಳಿದುಬಿಡುತ್ತದೆ. ಅಮ್ಮನಿಗಾದ ನೋವು ಊಹಿಸಿಕೊಳ್ಳುವುದು ಕಷ್ಟ.
ಸಾವಿನ ರಹಸ್ಯ ಇದುವರೆಗೆ ಯಾರಿಗೂ ತಿಳಿದಿಲ್ಲ. ಸಾವಿನ ನಂತರ ಏನು ಎಂದು ಎಲ್ಲ ಧರ್ಮಗಳೂ ಒಂದೊಂದು ವ್ಯಾಖ್ಯಾನ ಕೊಡುತ್ತವೆ. ಹಿಂದೂ ಧರ್ಮದಲ್ಲಿ ಸಾವಿನ ಬಗ್ಗೆ ಗರುಡ ಪುರಾಣದಲ್ಲಿ ವಿವರಣೆ ಸಿಗುತ್ತದೆ. http://www.sacred-texts.com/hin/gpu/index.htm. ಈ ಕರ್ಮಾಂಗಗಳನ್ನು ಮಾಡುವುದರಿಂದ ಮನಸ್ಸಿಗೆ ಒಂದು ತರ ಸಮಾಧಾನ ಸಿಗುವುದು ನಿಜ.